ಮೀಡಿಯಾಯಂಬ ಪೆಧಂಭೂತ

ನಮ್ಮ ಅಭಿಪ್ರಾಯಗಳು ಎಲ್ಲಿಂದ ಉದ್ಭವಿಸಿದವು?

ನಾವು ಓದಿದ ಸಂಗತಿಯಿಂದ,ಇದ್ದನ್ನು ಓದಿರೋದು ಎಲ್ಲಿ? ವಾರ್ತಪತ್ರಿಕೆಯಲ್ಲಿ.
ಅಂದರೆ ನಮ್ಮ ಅಭಿಪ್ರಾಯವನ್ನು ರಚಿಸುವುದು ವಾರ್ತಾಪತ್ರಿಕೆ, ವಾರ್ತಪ್ರತಿಕೆಯಾ ಅಭಿಪ್ರಾಯ ಯಾರದು? ಜಾಹಿರತಿನವರದು, ಅಲ್ಲವೆ ಮತ್ತೆ, ಅವರ ಹಣದಿಂದತಾನೆ ನಾವು ರೂ.೬/.೫೦ರ ಪತ್ರಿಕೆಯನ್ನು ೧.೫೦ ರೂ ಕೊಳ್ಳಬಲ್ಲೆವು.
ಇನ್ನೋಮ್ಮ ಯಾರಾದರು, ಅಮೇರಿಕಾ, ಅಥವಾ ಇನ್ಯಾರೋ ನಮಗೆ ತಲಪಬೀಕಾದ ಸುದ್ದಿಯನ್ನು ತಡೆಹಾಕಿದ್ಧರೆ ಅಥವಾ, ನಡುಬೆರಳು ಹಾಕಿದ್ಧರೆಯೆಂದರೆ ಯಾರು ಇಲ್ಲಪ್ಪ ನಾವೇ ಜವಭ್ಧರಿಯಿದಕ್ಕೆ.
ಆಗ ಅಂದಂತೆ, ಒಂದು ವಾರ್ತಪತ್ರಿಕೆಯ ಬೆಲೆ ರೂ.೬.೫೦, ಇದ್ದನ್ನು ನಾವು ಕೊಳ್ಳುವ ಬೆಲೆ ರೂ.೨.೫೦ ಅಥವಾ ೧.೫೦, ಇದರ ಕರಥೆಯನ್ನು ತುಂಬುತ್ತಾರೆ ಜಾಹಿರಾತಿನವರು, ಹಾಗಾಗಿ ಅವರ ಅನಿಸಿಕೆಗಳು, ಅವರ ಅಗತ್ಯಗಳು ಮುಖ್ಯವಾಗುತ್ಹವೇ. ಈ ಬೆಲೆಯ ವ್ಯತ್ಯಾಸವಲ್ಲದೆ, ಇನ್ನು ವಾರ್ತಪತ್ರಿಕೆಯೊಂದಿಗೆ ಕೊಡುವ ಉಚಿತ ಕೊಡುಗೆಗಳು ಇವೆಲ್ಲರ ಬೆಲೆ ನಿಮ್ಮ ಅಭಿಪ್ರಾಯವನ್ನು ನಿಯಂತ್ರಿಸುವುದು.
ಈಗಂತೂ ಇಂಗ್ಲಿಷ್ ಸಂಸ್ಕೃತದ ಸ್ತಾನಕವನ್ನು ಆಕ್ರಮಿಸಿದೆ, ನಮ್ಮೂರ ಬದಲು ಇಂಗ್ಲಿಷ್ ಪಾತ್ರಿಕೆಗಳಿಗೆ ಬಹು-ರಾಷ್ಟೀಯ ಕಂಪನಿಗಳ ಜಾಹಿರಾತುಗಳು ಮುಖ್ಯ.
ಎಂದಿನ ವರಗೆ, ನಾವು ಉಚಿತ ಕೊಡುಗೆಯನ್ನು ಬಹೀಷ್ಕರಿಸಿ ನಾಗರೀಕರಾಗಿ, ಮನುಷ್ಯರಾಗಿ ನಮ್ಮ ಜವಾಬ್ಧಾರಿ ಹೊರಳು ಸಿದ್ಧರಿಲ್ಲವೋ ಅಂದಿನ ವರಗೆ ನಮಗೆ ಬರ್ಖ ದತ್ತಳೇ ಗತಿ.
ಆದರೆ ಇದ್ದನ್ನು ಕೊನೆಗೊಳಿಸುವ ಶಕ್ತಿಯು ನಮ್ಮಲ್ಲೇ ಇದೆ, ರೆಮೂತ್-ಎತ್ತಿ ಬೇಡದ ವಾಹಿನಿಯನ್ನು ನಿಲ್ಲಿಸಿ, ಸತ್ಯವರ್ದಿಸುವ ಪತ್ರಿಕೆಯಲ್ಲದಿದ್ದಲ್ಲಿ ಅದ್ದನ್ನು ತಿರಸ್ಕರಿಸಿ, ನಮ್ಮ ಈ ಮಹಾಶಕ್ತಿಯೊಂದಿಗೆ ನಮಗಿದೆ ಮಹಾ ಜವಾಬ್ಧಾದರಿ, ಅದನ್ನು ಹೊರಲು ನಾವು ಸಿದ್ದರೋ?

Posted

in

by

Comments

Leave a comment